ಮೂಡಂಬೈಲು ಶಾಸ್ತ್ರಿಗೆ ತಾಳ್ತಜೆ ಕೇಶವ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಫೆಬ್ರವರಿ 23 , 2015
|
ಫೆಬ್ರವರಿ 23, 2015
|
ಮೂಡಂಬೈಲು ಶಾಸ್ತ್ರಿಗೆ ತಾಳ್ತಜೆ ಕೇಶವ ಪ್ರಶಸ್ತಿ ಪ್ರದಾನ
ಸುಳ್ಯ :
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಯಕ್ಷ ಗಾನದ ಯಾವುದೇ ಪಾತ್ರದ ಅರ್ಥಗಾರಿಕೆ ಯನ್ನು ಸಮರ್ಥವಾಗಿ ಮಾಡಬಲ್ಲವರು. ಸ್ತ್ರೀಪಾತ್ರಧಾರಿಯಾಗಿ ಪ್ರಸಿದ್ಧರು. ಯಕ್ಷಗಾನ ವನ್ನು ತಲಸ್ಪರ್ಶಿ ಅಧ್ಯಯನ ನಡೆಸಿದ ಅವರು ನಡೆದಾಡುವ ಯಕ್ಷಗಾನದ ವಿಶ್ವಕೋಶ ಎಂದು ಹಿರಿಯ ವಿದ್ವಾಂಸ ಅಂಬಾತನಯ ಮುದ್ರಾಡಿ ಹೇಳಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಯಕ್ಷ ಗಾನದ ಹಿರಿಯ ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ 2014ರ ಪ್ರೊ.ತಾಳ್ತಜೆ ಕೇಶವ ಭಟ್ಟ ಅವರ ನೆನಪಿನ 'ಕೇಶವ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಶನಿವಾರ ಅಭಿನಂದನಾ ಭಾಷಣ ಮಾಡಿದರು.
ಪೊಳಲಿ ಶಂಕರನಾರಾಯಣ ಶಾಸ್ತ್ರಿ ಅವರ ನಂತರ ಶಾಸ್ತ್ರಿಗಳು ಪುರಾಣಕ್ಕೆ (ಕಥೆಗೆ) ದೋಷ ಬಾರದ ಹಾಗೆ ಅರ್ಥಗಾರಿಕೆ ನಡೆಸಿ ಮಿಂಚಿ ದವರು. ವಾದಪ್ರಿಯರಲ್ಲವಾದರೂ ಕೆಣಕಿದರೆ ಎದುರಾಳಿಯನ್ನು ಕೈಕಟ್ಟಿ ಹಾಕುವ ವಾಕ್ಚಾ ತುರ್ಯವುಳ್ಳವರಾಗಿದ್ದ ಅವರು ವಕೀಲರಾಗದೆ ಪಾತ್ರಧಾರಿಗಳಾಗಿ ಪ್ರಸಿದ್ಧರು ಎಂದರು.
ತಾಳ್ತಜೆ ಕೇಶವ ಭಟ್ಟರ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಹಿರಿಯ ಕಲಾವಿದ ಡಾ. ರಾಘವ ನಂಬಿಯಾರ್, ಯಕ್ಷಗಾನದ ಬಗ್ಗೆ ಸಮಗ್ರ ಅಧ್ಯಯನ ನಡೆಸಿರುವ ತಾಳ್ತಜೆ ಯವರು
ಯಕ್ಷಗಾನದ ದಾಖಲೀಕರಣಕ್ಕೆ ಅತ್ಯ ಮೂಲ್ಯ ಕೊಡುಗೆ ನೀಡಿದ್ದಾರೆ. ಕವಿಯಾಗಿ, ಭಾಷಾ ಬೋಧಕರಾಗಿ, ಸಂಶೋಧಕರಾಗಿ, ಯಕ್ಷಗಾನ ಗುರುವಾಗಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದರು.
ಪ್ರಶಸ್ತಿ ಸಮಿತಿಯ ಡಾ. ತಾಳ್ತಜೆ ವಸಂತ ಕುಮಾರ್ ಮಾತನಾಡಿ, ತಾಳ್ತಜೆ ಕೇಶವ ಭಟ್ಟರು ಕನ್ನಡದ ವಿದ್ವತ್ ಪರಂಪರೆಯ ಹಿರಿಯರಾಗಿ ಕನ್ನಡದ ಕೆಲಸ ಮಾಡಿದರು. ಹಳೆಗನ್ನಡ ಸಾಹಿತ್ಯ, ಸಂಶೋಧನೆ, ಶಾಸ್ತ್ರಗ್ರಂಥ ಗಳ ಅಧ್ಯಯನ, ಜನಪದ ಲೋಕದ ಕ್ಷೇತ್ರ ಕಾರ್ಯ, ದೇಸಿ ಕಲೆ ಯಕ್ಷಗಾನದ ಬಗ್ಗೆ ಅಭ್ಯಾಸ ಮಾಡಿ ಮಿಂಚಿದವರು ಎಂದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಆಡಳಿತಾಧಿಕಾರಿ ಡಾ.ಎಚ್. ಶಾಂತರಾಂ ಅಧ್ಯಕ್ಷತೆ ವಹಿಸಿದ್ದರು. ತಾಳ್ತಜೆ ಪುತ್ರ ರಘುಪತಿ ಟಿ.ಕೆ. ಉಪಸ್ಥಿತರಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಎಂಜಿಎಂ ಕಾಲೇಜು ಹಾಗೂ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಎಚ್. ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.
ಕೃಪೆ :
http://vijaykarnataka.com
|
|
|